ಪರಶುರಾಮ ಸೃಷ್ಟಿ ಎಂದು ಕರೆಯಲ್ಪಡುವ ತುಳು ನಾಡಿನ ಕಾಪು ತಾಲೂಕಿನ, ಶಿರ್ವ ಗ್ರಾಮದ ತಿರುಪತಿ ಸಮಾನವಾದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ, ಒಡೆಯ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಹಾಗೂ ಸಮೀಪದಲ್ಲಿರುವ ಬಂಟಕಲ್ಲು, ಪಂಜಿಮಾರು, ಮಾಣಿಬೆಟ್ಟು ಮಟ್ಟಾರು, ಸೂಡ, ಬೆಳ್ಳೆ, ನಿಂಜೂರು ಮತ್ತು ಆ ಮತ್ತು ಈ ಸಾನಿಧ್ಯಕ್ಕೆ ಒಳಪಡುವ ಅನೇಕ ಪ್ರದೇಶದ ಭಕ್ತರ ವರಪ್ರಸಿದ್ದ ಹಾಗೂ ಅತೀ ಕಾರಣಿಕವುಳ್ಳ ಇತಿಹಾಸ ಪ್ರಸಿದ್ಧ ಸಾನಿಧ್ಯವೇ ಶಿರ್ವ ಶ್ರೀ ಮಹಮ್ಮಾಯಿ ಅಮ್ಮನವರ ಸಾನಿಧ್ಯ, ಶಿರ್ವ ಮಾರಿಗುಡಿ ಎಂಬ ನಾಮಂಕಿತದಲ್ಲಿ ಪ್ರಸಿದ್ದಿಯಲ್ಲಿದೆ. ಶಿರ್ವ ಪೇಟೆಯಿಂದ ಸುಮಾರು 3-4 ಕಿ.ಮೀ. ದೂರದಲ್ಲಿದೆ.