Skip to content Skip to footer

Welcome to Shirva Marigudi Temple

ಪರಶುರಾಮ ಸೃಷ್ಟಿ ಎಂದು ಕರೆಯಲ್ಪಡುವ ತುಳು ನಾಡಿನ ಕಾಪು ತಾಲೂಕಿನ, ಶಿರ್ವ ಗ್ರಾಮದ ತಿರುಪತಿ ಸಮಾನವಾದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ, ಒಡೆಯ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಹಾಗೂ ಸಮೀಪದಲ್ಲಿರುವ ಬಂಟಕಲ್ಲು, ಪಂಜಿಮಾರು, ಮಾಣಿಬೆಟ್ಟು ಮಟ್ಟಾರು, ಸೂಡ, ಬೆಳ್ಳೆ, ನಿಂಜೂರು ಮತ್ತು ಆ ಮತ್ತು ಈ ಸಾನಿಧ್ಯಕ್ಕೆ ಒಳಪಡುವ ಅನೇಕ ಪ್ರದೇಶದ ಭಕ್ತರ ವರಪ್ರಸಿದ್ದ ಹಾಗೂ ಅತೀ ಕಾರಣಿಕವುಳ್ಳ ಇತಿಹಾಸ ಪ್ರಸಿದ್ಧ ಸಾನಿಧ್ಯವೇ ಶಿರ್ವ ಶ್ರೀ ಮಹಮ್ಮಾಯಿ ಅಮ್ಮನವರ ಸಾನಿಧ್ಯ, ಶಿರ್ವ ಮಾರಿಗುಡಿ ಎಂಬ ನಾಮಂಕಿತದಲ್ಲಿ ಪ್ರಸಿದ್ದಿಯಲ್ಲಿದೆ. ಶಿರ್ವ ಪೇಟೆಯಿಂದ ಸುಮಾರು 3-4 ಕಿ.ಮೀ. ದೂರದಲ್ಲಿದೆ.

ಶಿರ್ವದ ಅಪ್ಪೆ

ಜಾತಿ-ಮತ ಭೇದವಿಲ್ಲದೆ ಊರ-ಪರವೂರ ಭಕ್ತರ ಸಹಕಾರದಿಂದ ಕಾಲ-ಕಾಲಕ್ಕೆ ಮಾರಿಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಕುಂಕುಮಾರತಿ ಇತ್ಯಾದಿ ಸೇವೆಗಳಿಗೆ ಅರ್ಹಳಾದ ಮಹಾತಾಯಿ, ನಂಬಿದ ಭಕ್ತರ ಆಶೋತ್ತರಗಳನ್ನು ಇಡೇರಿಸಿ. “ಶಿರ್ವದ ಅಪ್ಪೆ" ಎಂದೇ ಪ್ರಸಿದ್ಧಿ ಹೊಂದಿರುತ್ತಾಳೆ.
ಶಿರ್ವದ ಗ್ರಾಮದೇವರಾದ. ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವರ ಅಪ್ಪಣೆಯನ್ನು ಪಡೆದು ನೂರಾರು ವರ್ಷಗಳ ಹಿಂದೆ ಸಮೀಪದ ಮಾಣಿಬೆಟ್ಟು ಅರಂತಡೆ ಮನೆತನಕ್ಕೆ ಸಂಬಂಧಪಟ್ಟ ಪುಣ್ಯ ಭೂಮಿ ಬಲ್ಲಾಡಿಕರೆ ಎಂಬ ಪ್ರಶಾಂತ ಪರಿಸರದಲ್ಲಿ ನೆಲೆ ನಿಂತಿರುವಳು. ವರ್ಷಂಪ್ರತಿ ಅಮ್ಮನವರ ಸಾನಿಧ್ಯದಲ್ಲಿ ಆಷಾಢ ತಿಂಗಳ ಮಾರಿ ಪೂಜೆ, ಸೋಣತಿಂಗಳ ಹೂವಿನಪೂಜೆ, ನವರಾತ್ರಿ ಮಾಸದ ಪೂಜೆ, ಹಾಗೂ ಜಾರ್ದೆ ತಿಂಗಳ ಮಾರಿಪೂಜೆ, ಇತ್ಯಾದಿ ಸೇವೆಗಳನ್ನು ಊರ-ಪರವೂರ ಭಕ್ತಾದಿಗಳ ಸಹಕಾರದಿಂದ ಶ್ರೀ ದೇವಿಯ ಅನುಗ್ರಹದಿಂದ ಕಾಲ - ಕಾಲಕ್ಕೆ ಅತೀ ವಿಜೃಂಭಣೆಯಿಂದ ನೆರವೇರುತ್ತದೆ.

Amma